ಕವನಗಳು 1. ನಡೆ ಇರಲಿ ನುಡಿದಂತೆ ನೋಟ ಇರಲಿ ದೃಷ್ಟಿಯಂತೆ ಪ್ರೀತಿ ಇರಲಿ ನಿಷ್ಕಲ್ಮಶದಂತೆ. ಜೆ.ಬಿ.ಕೆ. 2. ಸತ್ಯ ಹೇಳುವುದಿಲ್ಲ ನಿತ್ಯ ನಿತ್ಯ ನಡೆಯುವುದಿಲ್ಲ ಮಿಥ್ಯ ಸತ್ಯಮೇವವೆ ಪಥ್ಯ. ಜೆ.ಬಿ.ಕೆ. 3. ಪುಸ್ತಕದ ಜ್ಞಾನ ತುಂಬಿದೆ ಮಸ್ತಕದಿ ಅಹಂ ಅಜ್ಞಾನದ ಗೂಡಾಯಿತು. ಮಾಹಿತಿ ತುಂಬಿದ ಜ್ಞಾನದ ಜಗದಲ್ಲಿ ಮಾನವೀಯ ಮೌಲ್ಯಗಳ ಮರೀಚಿಕೆಯಾಯಿತು. ಜೆ.ಬಿ.ಕೆ. 4. ಮಾಹಾನ ಸಾಧಕರು ಮೌನಿಯಾದರು ಸಾಧಿಸದ ಸಾಧಕರು ಮಹನೀಯರಾದರು. ಸೃಷ್ಟಿ ನಿಶಬ್ದ, ಲಯ ಶಬ್ದ. ...
Popular posts from this blog
ಸಾಮಾನ್ಯ ಜ್ಞಾನ
1 ) ಊಟ ಮಾಡಿದ ನಂತರ ನಿದ್ರೆ ಬರಲು ಕಾರಣವೇನು? ಆಹಾರವು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಗಳ ಸಮೃದ್ಧ ಆಕರಗಾಳಗಿವೆ.ಇವುಗಳ ಸೇವನೆ ನಂತರ ಜೀರ್ಣ ಪ್ರಕ್ರಿಯೆಯಲ್ಲಿ ಗ್ಲೋಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇನ್ಸುಲಿನ ಪ್ರಮಾಣ ಹೆಚ್ಚಾಗುತ್ತದೆ.ಟ್ರಿಪ್ತೊಫನ್ ಕೊಬ್ಬಿನ ಆಮ್ಲ ಪ್ರವೇಶಿಸಲು ಪ್ರೇರೇಪಿಸುತ್ತದೆ. ಇದು ಮೆಲಟೋನಿನ್ ಮತ್ತು ಸಿರೋಟೋನಿನ್ ಹಾರ್ಮೋನ್ ಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ನಿದ್ರೆ ಸಂಭಂದಿಸಿದ ಹಾರ್ಮೋನಗಳಾಗಿವೆ. 2) ಪೇರಳೆ ಹಣ್ಣಿನ (ಜಾಪುಳಕಾಯಿ)ಪ್ರಯೋಜನಗಳು: ಈ ಹಣ್ಣಿನಲ್ಲಿ ಜೀವಸತ್ವ "ಸಿ", ಲೈಕೋಪಿನ್ ಹಾಗೂ ಆಂಟಿ ಆಕ್ಸಿಡೆಂಟಗಳು ಹೇರಳವಾಗಿ ಕಂಡುಬರುತ್ತವೆ. ಅ) ಮಧುಮೇಹಕ್ಕೆ ಸಹಾಯಕ:ಮಧುಮೇಹ ರೋಗಿಗಳಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.ಪೇರಳೆ ಹಣ್ಣು ನಿಯಮಿತವಾಗಿ ಸೇವಿಸುವುದರಿಂದ ಅದರಲ್ಲಿರುವ ಗ್ಲೈಸೆಮಿಗೆ ಇಂಡೆಕ್ಸ ಕಾರಣದಿಂದಾಗಿ ಮಧುಮೇಹ ನಿಯಂತ್ರಿಸಬಹುದು. ಆ)ಮಲಬದ್ಧತೆ ನಿವಾರಣೆ:ಪೇರಳೆ ಹಣ್ಣಿನ ಬೀಜಗಳು ಜೀರ್ಣಕ್ರಿಯೆಯ ಸಮ್ ಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಮಲಬದ್ಧತೆ ಸಮಸ್ಯೆ ಕೂಡ ಇರುವುದಿಲ್ಲ. ಇ)ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಪೇರಳೆ ಹಣ್ಣಿನಲ್ಲಿ ಜೀವಸತ್ವ ʼಸಿʼ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ) ಕಣ್ಣಿನ ದೃಷ್ಟಿಗೆ...
ಕರ್ನಾಟಕದ ವಿಜ್ಞಾನಿಗಳ ಚಿಂತಾಮಣಿ ನಾಗೇಶ ರಾಮಚಂದ್ರರಾವ್ C N R RAO ಸಿ.ಎನ್ಆರ್. ರಾವ ವಿಶ್ವ ವಿಖ್ಯಾತ ವಿಜ್ಞಾನಿಗಳಲೊಬ್ಬರು. ಹನುಮಂತ ನಾಗೇಶರಾವ್ ಮತ್ತು ನಾಗಮ್ಮ ದಂಪತಿಗಳ ಮಗನಾದ ಪೊ. ಚಿಂತಾಮಣಿ ನಾಗೇಶರಾಮಚಂದ್ರರಾವ್ ಅವರು 1934, ಜೂನ್ 30 ರಂದು ಬೆಂಗಳೂರಿನಲ್ಲಿ ಜನಿಸಿದರು. ಶಿಕ್ಷಣ: ಆರು ವರ್ಷದವರಾಗಿದ್ದಾಗಲೆ ಮಾಧ್ಯಮಿಕ ಶಾಲೆಗೆ ಹೋಗಲರಾಂಭಿಸಿದರು. ತರಗತಿಯಲ್ಲಿಯೆ ಅವರು ಚಿಕ್ಕವರಾಗಿದ್ದರೂ, ಸಹಪಾಠಿಗಳು ಹಿರಿಯರಾಗಿದ್ದರೂ ಇದು ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರ ಪ್ರತಿಭೆಯು ತಮ್ಮ ವಯಸ್ಸಿಗೂ ಮೀರಿ ಗುರುತಿಸಿಕೊಂಡಿದ್ದರು. ವಿಜ್ಞಾನ ವಿಷಯದ ಬಗ್ಗೆ ಇರುವ ಆಕರ್ಷಣೆ ಕೂಡಾ ಕಾರಣವಾಗಿತ್ತು. ಮೈಸೂರು ರಾಜ್ಯದ ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ (ಇಂದಿನ 7 ನೆಯ ತರಗತಿಗೆ ಸಮಾನದದ್ದು) 1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಪ್ರೌಢಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತರು. ಪ್ರೌಢ ಶಾಲೆಯಲ್ಲಿ ಶ್ರೇಷ್ಠ ಶಿಕ್ಷಕರಿದ್ದರು. ರಸಾಯನಶಾಸ್ತ್ರದ ಶಿಕ್ಷಕರಾದ ಮಾನ್ಯ ಶಿವರುದ್ರಪ್ಪ, ಪಿ.ಎಸ್. ನಾರಾಯಣರಾವ್, ಮ...
Comments
Post a Comment