ಕರ್ನಾಟಕದ ವಿಜ್ಞಾನಿಗಳ ಚಿಂತಾಮಣಿ ನಾಗೇಶ ರಾಮಚಂದ್ರರಾವ್ C N R RAO ಸಿ.ಎನ್ಆರ್. ರಾವ ವಿಶ್ವ ವಿಖ್ಯಾತ ವಿಜ್ಞಾನಿಗಳಲೊಬ್ಬರು. ಹನುಮಂತ ನಾಗೇಶರಾವ್ ಮತ್ತು ನಾಗಮ್ಮ ದಂಪತಿಗಳ ಮಗನಾದ ಪೊ. ಚಿಂತಾಮಣಿ ನಾಗೇಶರಾಮಚಂದ್ರರಾವ್ ಅವರು 1934, ಜೂನ್ 30 ರಂದು ಬೆಂಗಳೂರಿನಲ್ಲಿ ಜನಿಸಿದರು. ಶಿಕ್ಷಣ: ಆರು ವರ್ಷದವರಾಗಿದ್ದಾಗಲೆ ಮಾಧ್ಯಮಿಕ ಶಾಲೆಗೆ ಹೋಗಲರಾಂಭಿಸಿದರು. ತರಗತಿಯಲ್ಲಿಯೆ ಅವರು ಚಿಕ್ಕವರಾಗಿದ್ದರೂ, ಸಹಪಾಠಿಗಳು ಹಿರಿಯರಾಗಿದ್ದರೂ ಇದು ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರ ಪ್ರತಿಭೆಯು ತಮ್ಮ ವಯಸ್ಸಿಗೂ ಮೀರಿ ಗುರುತಿಸಿಕೊಂಡಿದ್ದರು. ವಿಜ್ಞಾನ ವಿಷಯದ ಬಗ್ಗೆ ಇರುವ ಆಕರ್ಷಣೆ ಕೂಡಾ ಕಾರಣವಾಗಿತ್ತು. ಮೈಸೂರು ರಾಜ್ಯದ ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ (ಇಂದಿನ 7 ನೆಯ ತರಗತಿಗೆ ಸಮಾನದದ್ದು) 1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಪ್ರೌಢಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತರು. ಪ್ರೌಢ ಶಾಲೆಯಲ್ಲಿ ಶ್ರೇಷ್ಠ ಶಿಕ್ಷಕರಿದ್ದರು. ರಸಾಯನಶಾಸ್ತ್ರದ ಶಿಕ್ಷಕರಾದ ಮಾನ್ಯ ಶಿವರುದ್ರಪ್ಪ, ಪಿ.ಎಸ್. ನಾರಾಯಣರಾವ್, ಮ...
Comments
Post a Comment